ಬೆಂಗಳೂರು ಪಶ್ಚಿಮ ನಗರ ಪಾಲಿಕೆ

ನಾಗರಿಕರಿಂದ ಬಂದ ದೂರುಗಳನ್ನು ಕಾಲಮಿತಿಯೊಳಗೆ ಇತ್ಯರ್ಥಪಡಿಸಿ : ಡಾ. ರಾಜೇಂದ್ರ ಕೆ.ವಿ.

ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿಯಲ್ಲಿ ನಡೆದ ಫೋನ್-ಇನ್ ಕಾರ್ಯಕ್ರಮದಲ್ಲಿ ನಾಗರಿಕರಿಂದ ಬಂದ ದೂರುಗಳನ್ನು ಕಾಲಮಿತಿಯೊಳಗೆ ಇತ್ಯರ್ಥಪಡಿಸುವಂತೆ ಆಯುಕ್ತರಾದ ಡಾ. ರಾಜೇಂದ್ರ ಕೆ.ವಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಇಂದು ಸಂಜೆ 5.00ರಿಂದ 6.00 ಗಂಟೆಯವರೆಗೆ ನಡೆದ ಫೋನ್-ಇನ್ ಕಾರ್ಯಕ್ರಮದಲ್ಲಿ ನಾಗರಿಕರೊಂದಿಗೆ ನೇರವಾಗಿ ಮಾತನಾಡಿದ ಅವರು, ಅವರ ಸಮಸ್ಯೆಗಳನ್ನು ಖುದ್ದು ಆಲಿಸಿದರು. ಅಲ್ಪಾವಧಿ ದೂರುಗಳನ್ನು ಕೂಡಲೆ ಇತ್ಯರ್ಥಪಡಿಸಿ: ನಾಗರಿಕರಿಂದ ಫೋನ್-ಇನ್ ಮೂಲಕ ಬಂದ ದೂರುಗಳನ್ನು ವಿಭಾಗವಾರು ಪಟ್ಟಿ ಮಾಡಿಕೊಂಡು, ಅಲ್ಪಾವಧಿಯಲ್ಲಿ ಇತ್ಯರ್ಥಪಡಿಸಬಹುದಾದ ದೂರುಗಳನ್ನು ತಕ್ಷಣವೇ ಬಗೆಹರಿಸಬೇಕು. ದೀರ್ಘಾವಧಿ ದೂರುಗಳನ್ನು ಪ್ರತ್ಯೇಕವಾಗಿ ಪಟ್ಟಿ ಮಾಡಿ, ಅವುಗಳಿಗೆ ಸೂಕ್ತ ಪರಿಹಾರ ಹುಡುಕಿ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಪಾರ್ಕ್ ಜವಾಬ್ದಾರಿ ಒಬ್ಬ ಅಧಿಕಾರಿಗೆ: ಯಾವುದೇ ಪಾರ್ಕ್‌ನಲ್ಲಾಗಲಿ — ವಾಯು ವಿಹಾರ ಮಾರ್ಗ, ಆಸನ, ದೀಪ, ಜಿಮ್ ಉಪಕರಣಗಳು, ಅಪಾಯ ಸ್ಥಿತಿಯಲ್ಲಿರುವ ಮರ ಅಥವಾ ರೆಂಬೆ-ಕೊಂಬೆ ತೆರವು ಇತ್ಯಾದಿ ಸಮಸ್ಯೆಗಳು ಇದ್ದಲ್ಲಿ, ಅವುಗಳನ್ನು ಒಬ್ಬ ಅಧಿಕಾರಿಯೇ ಮೇಲ್ವಿಚಾರಣೆ ಮಾಡಿ ಬಗೆಹರಿಸಬೇಕು ಎಂದು ಸೂಚಿಸಿದರು. 42 ದೂರುಗಳ ಸ್ವೀಕಾರ: ಇಂದು ನಡೆದ ಫೋನ್-ಇನ್ ಕಾರ್ಯಕ್ರಮದಲ್ಲಿ 42 ದೂರುಗಳನ್ನು ಸ್ವೀಕರಿಸಲಾಗಿದ್ದು, ಅವುಗಳನ್ನು ಸಹಾಯ 2.0 ತಂತ್ರಾಂಶದಲ್ಲಿ ದಾಖಲಿಸಬೇಕು. ನಂತರ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಸಮಸ್ಯೆಗಳನ್ನು ಇತ್ಯರ್ಥಪಡಿಸುವಂತೆ ಸೂಚಿಸಿದರು. ಇಲಾಖೆಗಳಿಗೆ ದೂರು ರವಾನಿಸಿ: ಬೆಸ್ಕಾಂ, ಜಲಮಂಡಳಿ ಸೇರಿದಂತೆ ಇತರೆ ಇಲಾಖೆಗಳಿಗೆ ಸಂಬಂಧಿಸಿದ ನಾಗರಿಕರ ದೂರುಗಳನ್ನು, ಆಯಾ ಇಲಾಖೆಗೆ ಪತ್ರದೊಂದಿಗೆ ಕಳುಹಿಸಿ ಅವುಗಳನ್ನು ಇತ್ಯರ್ಥಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ನಾಗರಿಕರಿಂದ ಬಂದ ಪ್ರಮುಖ ದೂರುಗಳು: * ರಸ್ತೆ ಬದಿ ಕಸ ಹಾಕುವ ಸಮಸ್ಯೆ ನಿವಾರಿಸಿ * ಅಪಾಯ ಸ್ಥಿತಿಯಲ್ಲಿರುವ ಮರ, ರೆಂಬೆ-ಕೊಂಬೆಗಳ ತೆರವುಗೊಳಿಸಿ * ಬೀದಿ ನಾಯಿಗಳ ಹಾವಳಿ ನಿಯಂತ್ರಿಸಿ * ವಿದ್ಯುತ್ ಕಂಬ ಅಳವಡಿಸಿ * ಸರ್ಕಾರಿ ಜಾಗದ ಅಕ್ರಮ ಒತ್ತುವರಿ ತೆರವುಗೊಳಿಸಿ * ಸಾರ್ವಜನಿಕ ಶೌಚಾಲಯಗಳ ಸರಿಯಾದ ನಿರ್ವಹಣೆ ಮಾಡಿ * ಪಾದಚಾರಿ ಮಾರ್ಗಗಳಲ್ಲಿನ ಅಕ್ರಮ ಪಾರ್ಕಿಂಗ್ ಮತ್ತು ಒತ್ತುವರಿ ನಿಯಂತ್ರಿಸಿ * ಇ-ಖಾತಾ ಪ್ರಕ್ರಿಯೆಯ ತೊಂದರೆ ನಿವಾರಿಸಿ * ಅಂಜನಾ ನಗರದ ಗಣೇಶ್ ಫಾರ್ಮ್ ಪಾರ್ಕ್ ಅಭಿವೃದ್ಧಿಪಡಿಸಿ * ಎಂ.ಎ.ಇ. ಕಾಲೋನಿಯ ಬೃಹತ್ ನೀರುಗಾಲುವೆ ಪೈಪ್ ದುರಸ್ತಿಗೊಳಿಸಿ * ಅನಧಿಕೃತ ಕಟ್ಟಡಗಳ ತೆರವುಗೊಳಿಸಿ ಪ್ರತಿ ಗುರುವಾರ ಫೋನ್-ಇನ್: ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಪ್ರತಿ ಗುರುವಾರ ಸಂಜೆ 5.00 ರಿಂದ 6.00 ಗಂಟೆಯವರೆಗೆ ಫೋನ್-ಇನ್ ಕಾರ್ಯಕ್ರಮ ನಡೆಯಲಿದ್ದು, ನಿಯಂತ್ರಣ ಕೊಠಡಿ ಸಂಖ್ಯೆಗಳಾದ 080-23365469 ಮತ್ತು 080-23563029 ಗೆ ನಾಗರಿಕರು ಕರೆ ಮಾಡಿ ಆಯುಕ್ತರೊಂದಿಗೆ ನೇರವಾಗಿ ಮಾತನಾಡಿ ತಮ್ಮ ಸಮಸ್ಯೆಗಳು ಮತ್ತು ಅಹವಾಲುಗಳನ್ನು ತಿಳಿಸಬಹುದಾಗಿದೆ. ಈ ವೇಳೆ ಅಪರ ಆಯುಕ್ತರು (ಅಭಿವೃದ್ಧಿ) ದಿಗ್ವಿಜಯ್ ಬೋಡ್ಕೆ, ಅಪರ ಆಯುಕ್ತರು (ಕಂದಾಯ) ಮಂಜುನಾಥ ಸ್ವಾಮಿ, ಜಂಟಿ ಆಯುಕ್ತರು ಸಂಗಪ್ಪ ಮತ್ತು ಆರತಿ ಆನಂದ್, ಮುಖ್ಯ ಅಭಿಯಂತರ ರಾಜೇಶ್, ಸ್ವಯಂಪ್ರಭ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು

whatsapp image 2025 11 13 at 7.24.11 pm whatsapp image 2025 11 13 at 7.24.11 pm whatsapp image 2025 11 13 at 7.24.12 pm